ಬಾದಾಮಿ: ಉತ್ತರ ಕರ್ನಾಟಕದ ಸುಪ್ರಸಿದ್ಧ ಸುಕ್ಷೇತ್ರ ಶ್ರೀ ಕ್ಷೇತ್ರ ಬನಶಂಕರಿದೇವಿ ದೇವಸ್ಥಾನದಲ್ಲಿ 2026 ನೇ ಸಾಲಿನ ಜಾತ್ರಾಮಹೋತ್ಸವದ ಅಂಗವಾಗಿ ವಿವಿದ ಕಾರ್ಯಕ್ರಮಗಳು ಡಿ.27 ರಿಂದ ಆರಂಭವಾಗಿ ಜ.15 ರ ವರೆಗೆ ನಡೆಯಲಿವೆ.
petkarmedia: ಭಕ್ತರ ಆರಾಧ್ಯ ದೇವತೆ ಬಾದಾಮಿ ಬನಶಂಕರಿ
ಡಿ.27 ರಿಂದ ಜ.2 ರ ವರೆಗೆ ಹೋಮ ಹವನಾದಿಗಳು,ವಾಹನೋತ್ಸವದ ಮತ್ತು ಅಷ್ಠಾವಧಾನ-ಸೇವೆ, ಜ.2 ರಂದು ಶುಕ್ರವಾರ ಪೌಷ್ಯ ಶುದ್ಧ ಚತುರ್ದಶಿ ಪಲೇದ ಹಬ್ಬ, ಜ.3 ರಂದು ಶನಿವಾರ ಪೌಷ್ಯ ಶುದ್ಧ ಪೌರ್ಣಿಮೆ ಸಾಯಂಕಾಲ 5 ಘಂಟೆಗೆ ಮಹಾರಥೋತ್ಸವ ಜರುಗುವದು.
petkarmedia: ಬಾದಾಮಿ ಬನಶಂಕರಿ ದೇವಾಲಯದ ಮುಖ್ಯ ದ್ವಾರ
ಜ.7 ರಂದು ಸಂಜೆ 5 ಗಂಟೆಗೆ ಪೌಷ್ಯ ಕೃಷ್ಣ ಚತುರ್ಥಿ ಕಳಸ ಇಳಿಯುವದು. ಜ.15 ಪೌಷ್ಯ ಕೃಷ್ಣ ದ್ವಾದಶಿ ಮಕರ ಸಂಕ್ರಮಣ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಬನಶಂಕರಿ ದೇವಸ್ಥಾನದ ಟ್ರಸ್ಟ್ ಕಮೀಟಿ ಚೇರಮನ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಸ್ಥಳೀಯ ಸುದ್ದಿಗಳಿಗಾಗಿ Petkarmedia.com ನೋಡಿ.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ